Thursday, December 5, 2013

ಜೀವನ ಒಂಟಿ ರೈಲು ನಿಲ್ದಾಣ

ಅವಧಿಯಲ್ಲಿ ಪ್ರಕಟಗೊಂಡ ನನ್ನ ಎರಡನೇ ಲೇಖನ... ನಿಮಗಾಗಿ


ಯಾಕೋ ರೈಲು ನಿಲ್ದಾಣ ನೋಡಿದಾಗ…

ಜೀವನ ಒಂಟಿ ರೈಲು ನಿಲ್ದಾಣ

ನವೀನ್ ಕುಮಾರ್ ಕೆ

ಮೊನ್ನೆ ಶನಿವಾರ ನನಗೆ ಪರೀಕ್ಷೆ ಇತ್ತು, ಬಳ್ಳಾರಿಯಲ್ಲಿ. ಸರಿ ಪರೀಕ್ಷೆ ಅಂದ ಮೇಲೆ ತಪ್ಪಿಸೋಕಾಗುತ್ತಾ? ಶುಕ್ರವಾರದಂದು ರಾತ್ರಿಯೇ ಬೆಂಗಳೂರಿನಿಂದ ಹೊರಟೆ. ರಾತ್ರಿ ಪೂರಾ ಬಸ್ಸಿನಲ್ಲಿ ನಿದ್ದೆ ಇಲ್ಲ. ಬೆಳಗಾದರೆ 9 ಗಂಟೆಗೆ ಪರೀಕ್ಷೆ ಬೇರೆ. ಹಾಗೂ ಹೀಗೂ ಬಸ್ಸು ಬಳ್ಳಾರಿ ತಲುಪಿದಾಗ ಬೆಳಗಿನ ಜಾವ 4.50ರ ಸಮಯ. ಬಸ್ಸಿಳಿದೊಡನೆ ನನ್ನನ್ನು ಪಿಕ್ ಮಾಡಲು ಬರುತ್ತೇನೆಂದು ಒಪ್ಪಿಕೊಂಡಿದ್ದ ಗೆಳೆಯನಿಗೆ ಫೋನ್ ಮಾಡಿದರೆ, ಮಹಾಶಯನಿಂದ ಉತ್ತರವೇ ಇಲ್ಲ. ಗಡದ್ದಾಗಿ ನಿದ್ದೆ ಮಾಡುತ್ತಿದ್ದನೆನಿಸುತ್ತೆ. ಐದಾರು ಬಾರಿ ಕರೆ ಮಾಡಿ ಕೊನೆಗೆ ಬೇಸತ್ತು ನಡೆದುಕೊಂಡೇ ಹೊರಟೆ.
ಸುಮಾರು ಹನ್ನೊಂದು ವರ್ಷಗಳ ಕಾಲ ಬಳ್ಳಾರಿಯಲ್ಲೇ ಇದ್ದರೂ ಬೆಳಗಿನ ಸಮಯದಲ್ಲಿ ಅದೂ 5 ಗಂಟೆಗೇ, ನಾನು ಹೊರಗೆ ಬಂದಿದ್ದು ತೀರಾ ವಿರಳ. ಇನ್ನೂ ಮಬ್ಬುಗತ್ತಲು ಹಾಗೆಯೇ ಇತ್ತು. ಆ ಕತ್ತಲಲ್ಲಿಯೇ ನಾನು ನಡೆದು ಸಾಗಿದಂತೆಲ್ಲಾ ಕಪ್ಪು ಟಾರಿನ ರಸ್ತೆಯನ್ನು ಹಿಮ್ಮೆಟ್ಟಿ ಸಾಗುತ್ತಿರುವ ಅನುಭವ ನನಗೆ ನಡೆದು ಹೋಗಲು ಸ್ಪೂರ್ತಿಯಾಗಿತ್ತು. ಹಾಗೇ ಮುಂದೆ ಬಳ್ಳಾರಿಯ ಗುಡ್ಡದ ಪಕ್ಕದಿಂದಲೇ ಹಾದು ಹೋಗುವ ರಸ್ತೆಯಲ್ಲಿ ಗಡ್ಡದ ಕಲ್ಲು ಬಂಡೆಗಳೂ, ಕರಿಯ ಹೊದಿಕೆ ಹೊದ್ದ ಆಕಾಶವೂ ಮಿಲನಗೊಂಡ ಭ್ರಾಂತಿ. ಈ ಮಿಲನವನ್ನು ತಡೆಯಲೇನೋ ಎಂಬಂತೆ, ಸೂರ್ಯ ಎಲ್ಲಿಂದ ಹೊರಬರಬೇಕೆಂದು ತವಕಿಸುತ್ತಾ ಇಣುಕಿ ನೋಡುತ್ತಿದ್ದಾನೇನೋ ಎಂದು ಭಾಸವಾಗುತ್ತಿತ್ತು. ರಾತ್ರಿಯೆಂದರೆ ಕರಾಳವಾಗೇ ಊಹಿಸಿಕೊಳ್ಳುತ್ತಿದ್ದ ನನಗೆ ಕತ್ತಲು ಕೂಡ ಇಷ್ಟು ರಮ್ಯವಾಗಿರುವುದು ಎಂದು ತಿಳಿದದ್ದೇ ಅಂದು. ಹಾಗೆಯೇ ಪ್ರಕೃತಿಯ ಸವಿ ಮತ್ತು ಮುಂಜಾವಿನ ತಣ್ಣನೆಯ ಗಾಳಿಯನ್ನು ಸವಿಯುತ್ತಾ ಭ್ರಮಾ ಲೋಕದಲ್ಲಿರುವಂತೆ ಮುಂದೆ ಸಾಗಿದವನಿಗೆ ಎಚ್ಚರವಾದದ್ದು ಸ್ನೇಹಿತನ ರೂಮು ಸಮೀಪಿಸಿದಾಗ.
ಹೋಗಿ ಬಾಗಿಲು ತಟ್ಟುತ್ತಿದ್ದಂತೆ ಗೆಳೆಯ ಬಾಗಿಲು ತೆರೆದವನೇ ಹೇಗಿದ್ದೀಯ ಬಾ ಒಳಗೆ… ಎಂದು ಸ್ವಲ್ಪ ರೆಸ್ಟ್ ತಗೋ ಅಂತ ಚಾಪೆ ತೋರಿಸಿದ. ಅಲ್ಲಿಯವರೆಗೂ ಎಲ್ಲಿತ್ತೋ ಗೊತ್ತಿಲ್ಲ, ನಲವತ್ತು ನಿಮಿಷದ ನಡಿಗೆಯ ಆಯಾಸ ಧುತ್ತೆಂದು ಹೊರಬಿತ್ತು, ಕಣ್ಣುಗಳು ಎಳೆಯ ತೊಡಗಿದವು. ಸರಿ ಸ್ವಲ್ಪ ಹೊತ್ತು ಮಲಗಿ ನಂತರ ಎದ್ದು ಫ್ರೆಷಪ್ ಆಗಿ ಪರೀಕ್ಷೆಗೂ ಒಂದಷ್ಟು ತಯಾರಿ ಮಾಡಿಕೊಂಡರಾಯ್ತು ಎಂದುಕೊಂಡು ಮಲಗಿದವನಿಗೆ ಎಚ್ಚರವಾಗಿದ್ದೆ ಎಂಟರ ಹೊತ್ತಿಗೆ. ಹರಿಬರಿಯಲ್ಲಿ ಎದ್ದವನೇ ಸ್ನಾನಾದಿಗಳನ್ನು ಮುಗಿಸಿ ನೇರ ಕಾಲೇಜ್ ಹತ್ತಿರವಿರುವ ಕ್ಯಾಂಟೀನ್ಗೆ ಹೋದವನೇ ಒಂದಷ್ಟು ಮಂಡಕ್ಕಿ ವಗ್ಗರಣೆ, ಮಿರ್ಚಿಯನ್ನು ಹೊಟ್ಟೆಯ ಚೀಲಕ್ಕೆ ತುಂಬಿಸಿಕೊಂಡು ಎಕ್ಸಾಮ್ ಹಾಲ್ಗೆ ಹೋದವನಿಗೆ ಪ್ರಶ್ನೆ ಪತ್ರಿಕೆ ನೋಡಿ ಅರ್ಧ ಜಂಘಾಬಲವೇ ಉಡುಗಿಹೋದಂತಾಗಿತ್ತು. ಮೊದಲೇ ಏನೂ ಓದಿರಲಿಲ್ಲ. ಇನ್ನು ಅದರಲ್ಲಿರುವ ಕೆಲವು ಪದಗಳು ಇದೇ ಮೊದಲಬಾರಿಗೆ ಓದಿದಂತೆ ಅನಿಸುತಿತ್ತು. ಆದರೂ ಹೇಗೋ ಒಂದಷ್ಟು ನೆನಪಿರುವುದನ್ನೆಲ್ಲಾ ಕಲೇಬಿದ್ದು ಮನಃ ಪಟಲದಲ್ಲಿ ಕೂಡಿಹಾಕಿಕೊಂಡು, ಅದನ್ನೇ ಉತ್ತರ ಪತ್ರಿಕೆಯಲ್ಲಿ ಬರೆದು, ಸಮಯ ಮುಗಿಯುತ್ತಿದ್ದಂತೆ ಬದುಕಿದೆಯಾ ಬಡಜೀವವೇ ಎಂದು ಹೊರಬಿದ್ದೆ.
ಮತ್ತೆ ಹೊಸಪೇಟೆಗೆ ಹೋಗಬೇಕಿದ್ದುದರಿಂದ ಸ್ನೇಹಿತನ ಮನೆಗೆ ಹೋಗಿ ಮಧ್ಯಾಹ್ನದ ಊಟ ಮುಗಿಸಿಕೊಂಡು ರೈಲ್ವೇ ಸ್ಟೇಷನ್ ಕಡೆ ಹೊರಟೆ. ನಿದ್ದೆಯ ಮಂಪರು ಇನ್ನೂ ಬಿಟ್ಟಿರಲಿಲ್ಲ. ತಲೆಯ ಮೇಲೆ ಮಟ ಮಟ ಮಧ್ಯಾಹ್ನದ ಬೆಂಕಿ ಚಂಡು ನೆತ್ತಿಯನ್ನು ಸುಡುತ್ತಿತ್ತು. ಸ್ಟೇಷನ್ ತಲುಪಿ ಟಿಕೇಟ್ ತೆಗೆಸಿಕೊಳ್ಳಲು ಹೋದರೆ ಅಲ್ಲೂ ರೈಲು ಬೋಗಿಗಳಷ್ಟು ಉದ್ದದ ಕ್ಯೂ. ಹದಿನೈದು ನಿಮಿಷಗಳ ಬೇಸರದ ಕಾಯುವಿಕೆಯ ನಂತರ ಟಿಕೇಟ್ ಪಡೆದು ಒಳ ಹೊಕ್ಕವನಿಗೆ, ಹಳೆಯ ಸಹ-ಕೆಲಸಗಾರನೊಬ್ಬ ಭೇಟಿಯಾದ. ಅವನು ತನ್ನ ಹೆಂಡತಿಯೊಂದಿಗೆ ಹುಬ್ಬಳ್ಳಿಗೆ ಹೊರಟಿದ್ದನಂತೆ. ಇತ್ತೀಚಿಗಷ್ಟೇ ಮದುವೆಯಾಗಿದ್ದ ಅವನ ಮುಖದಲ್ಲಿ ಇನ್ನೂ ಮದುಮಗನ ಕಳೆ ಎದ್ದು ಕಾಣುತಿತ್ತು. ಅವನ ಕುಶಲೋಪರಿ ವಿಚಾರಿಸಿ ಅವನ ನವಜೀವನಕ್ಕೆ ಶುಭ ಹಾರೈಸಿ ಮುಂದಕ್ಕೆ ಹೋದೆ. ಶನಿವಾರವಾದ ಕಾರಣ ನಿಲ್ದಾಣದ ತುಂಬಾ ಜನಜಂಗುಳಿ ಗಿಜಿಗುಡುತ್ತಿತ್ತು. ಚಿಕ್ಕ ಮಕ್ಕಳ ಅಳು, ಸತ್ತಲೂ ಇರುವವರ ಪರಿವೆಯೇ ಇಲ್ಲದಂತೆ ಜೋರಾಗಿ ಅವರಿವರ ಬಗ್ಗೆ ಮಾತನಾಡಿಕೊಳ್ಳುತ್ತಿರುವವರು, ಕೀಟಲೆ ಮಾಡುತ್ತಿರುವ ಮಕ್ಕಳನ್ನು ಗಡರಿಸುವವರು ಹೀಗೆ ನಾನಾ ರೀತಿಯ ಜನ ಅವರವರ ಲೋಕದಲ್ಲಿ ಮುಳುಗಿದ್ದರು.
ಆಗಲೇ ರೈಲು ಅರ್ಧಗಂಟೆ ತಡವಾಗಿ ಚಲಿಸುತ್ತಿದೆ ಎಂಬ ಉದ್ಘೋಷಕರ ಧ್ವನಿ ಕೇಳಿ ಎಲ್ಲರೂ ಈ ಲೋಕಕ್ಕೆ ಮರಳಿದವರಂತೆ, ಈ ರೈಲುಗಳ ಹಣೇಬರಹವೇ ಇಷ್ಟು. ಯಾವತ್ತಾದರೂ ಸಮಯಕ್ಕೆ ಸರಿಯಾಗಿ ಬಂದರೆ ಅದೇ ದೊಡ್ಡ ಸಾಹಸ ಎಂದು ಬೈದುಕೊಳ್ಳಲು ಶುರುವಿಟ್ಟರು. ಸರಿ ಇನ್ನೂ ಅರ್ಧಗಂಟೆ ಹೇಗೆ ಕಾಲ ಕಳೆಯುವುದು ಎಂದು ನನ್ನ ಬ್ಯಾಗ್ ತಡಕುತ್ತಿದ್ದವನಿಗೆ ಯಾವುದೋ ಮಾಸ ಪತ್ರಿಕೆಯೊಂದು ಸಿಕ್ಕಿತು. ಅದನ್ನೇ ಓದುತ್ತಾ ಕುಳಿತೆ. ಓದುತ್ತಿದ್ದವನಿಗೆ ಅದ್ಯಾವಾಗ ಅರ್ಧಗಂಟೆಯಾಯ್ತೋ ಗೊತ್ತಾಗಲಿಲ್ಲ. ಮತ್ತೆ ಇನ್ನು ಕೆಲವೇ ಕ್ಷಣಗಳಲ್ಲಿ ರೈಲು ನಿಲ್ದಾಣಕ್ಕೆ ಬರಲಿದೆ ಎಂಬ ಅನೌನ್ಸ್ಮೆಂಟ್ ಬಂದಾಗಲೇ ಎಚ್ಚರವಾಗಿದ್ದು. ಆಗ ಸುತ್ತಲೂ ನೋಡಿದೆ. ಎಲ್ಲರೂ ರೈಲಿನ ಬರುವಿಗಾಗಿ ಕಾಯುತ್ತಾ ಶತಪಥ ಹಾಕುತ್ತಿದ್ದರು. ಇನ್ನು ಕೆಲವರು ಸೀಟನ್ನು ಹಿಡಿಯಲು ಪ್ಲಾಟ್ಫರ್ಾಮ್ ಬಿಟ್ಟು ಆಚೆ ಬದಿಯಲ್ಲಿ ಹೋಗತೊಡಗಿದರು. ಆಗ ಗಮನ ಸೆಳೆದದ್ದು ಒಂದು ಪುಟ್ಟ ಹುಡುಗಿಯ ಧ್ವನಿ. ಅವಳು ಮಾಮಾ ಎಂದು ಕರೆಯುತ್ತಿದ್ದರೆ, ಯಾರಪ್ಪಾ ಅದು ಎಂದು ನೋಡಿದೆ. ಚಿಕ್ಕ ಮಗುವೊಂದು ಆಚೆ ಬದಿ ಹೋಗುತ್ತಿದ್ದ ತನ್ನ ಸೋದರಮಾವನನ್ನು ಕೂಗುತ್ತಿತ್ತು.
ಸುಮ್ಮನೆ ಆಟವಾಡಿಸಲು ಕೂಗುತ್ತಿದೆಯೇನೋ ಅನಿಸಿದರೂ, ಯಾಕೋ ಕುತೂಹಲ ಮೂಡಿ ಆ ಮಗುವನ್ನೇ ದಿಟ್ಟಿಸುತ್ತಿದ್ದೆ. ಮೂರ್ನಾಲ್ಕು ಸಲ ಕೂಗಿದ ನಂತರ ಆ ಹುಡುಗಿಯ ಮಾವ ಅವಳೆಡೆಗೆ ತಿರುಗಿದಾಗ, ಹಷಾರು ಮಾಮ, ತುಂಬಾ ಹತ್ತಿರ ಹೋಗಬೇಡ ಎಂದು ಎಚ್ಚರಿಕೆಯನ್ನು ನೀಡಿತು. ಆ ಎಳೆ ಹುಡುಗಿಗೆ ತನ್ನ ಮನೆಯವರ ಮೇಲೆ ಇರುವ ಪ್ರೇಮ, ಕಾಳಜಿ ನಿಜಕ್ಕೂ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು. ಅಷ್ಟರಲ್ಲೇ ನಾವು ಹೊರಡಬೇಕಿರುವ ರೈಲು ನಿಲ್ದಾಣಕ್ಕೆ ಬಂದು ನಿಂತಿದ್ದರಿಂದ, ನಾನೂ ಸೀಟು ಹಿಡಿದುಕೊಳ್ಳಲು ತರಾತುರಿಯಲಿ ಒಳ ಹೊಕ್ಕು, ಅಂತೂ ಒಂದು ಕಿಟಕಿ ಬದಿಯ ಕುರ್ಚಿಯಲ್ಲಿ ಕುಳಿತುಕೊಂಡೆ. ಹಾಗೇ ಕಿಟಕಿಗೆ ತಲೆಯಾನಿಸಿ ಹೊರ ನೋಡುತ್ತಿದ್ದವನಿಗೆ ಅಷ್ಟೊತ್ತು ಇದ್ದ ಜನರ ಕಲರವ, ಆ ಗಡಿಬಿಡಿ ಕಡಿಮೆಯಾಗುತ್ತಿರುವುದು ಕಾಣಿಸಿತು. ಹಾಗೇ ರೈಲು ಹೊರಡುವಷ್ಟರಲ್ಲಿ ರೈಲು ನಿಲ್ದಾಣ ಪೂರ್ತಿ ಖಾಲಿಯಾಗಿತ್ತು. ಬರಿ ಸಾಮಾನುಗಳನ್ನು ಸಾಗಿಸುವ ರೈಲ್ವೇ ಸಿಬ್ಬಂದಿಯನ್ನು ಬಿಟ್ಟು ಬೇರೆ ಯಾರೂ ಅಲ್ಲಿ ಕಾಣಲಿಲ್ಲ. ಆಗಲೇ ಅನಿಸಿದ್ದು, ನಮ್ಮ ಜೀವನವೂ ಇಷ್ಟೇ, ರೈಲು ನಿಲ್ದಾಣದಂತೆ. ಅನೇಕರ ಆಗಮವಾದರೂ, ಅವರವರ ರೈಲುಗಳು ಬಂದಾಗ, ಕೆಲವರು ಹೇಳಿ ಹೊರಟರೆ ಇನ್ನು ಕೆಲವರು ಹೇಳದೆಯೇ ಹೊರಟುಹೋಗುತ್ತಾರೆ. ಕೊನಗೆ ನಮ್ಮ ಜೀವನ ಒಂಟಿ ರೈಲು ನಿಲ್ದಾಣದಂತೆ ಖಾಲಿ ಖಾಲಿ.
ಬರುವಾಗಲೂ ಒಬ್ಬಂಟಿ
ಹೋಗುವಾಗಲೂ ಒಬ್ಬಂಟಿ
ನಡುವೆ ಬಾಂಧವ್ಯಗಳ, ಭಾವನೆಗಳ ಸರಮಾಲೆಹೊತ್ತು
ತಿರುಗುವ ಆತುರದಲ್ಲಿ
ಪ್ರಕೃತಿ ಸತ್ಯವನ್ನೇ ಮರೆತು ವೇಗದಿಂದ ಮುನ್ನುಗ್ಗುತ್ತೇವೆ,
ಇದ್ದಕ್ಕಿದ್ದಂತೆ ಒಂಟಿ ಎಂಬ ಸತ್ಯ
ಎದುರು ಗೋಚರಿಸಿದಾಗ ಮತ್ತೆ ಕುಗ್ಗಿ ಬಾಗುತ್ತೇವೆ.
ಹೀಗೆ ಯೋಚಿಸುತ್ತಾ ಕಿಟಕಿಗೆ ಆನಿಕೊಂಡು ಕುಳಿತವನಿಗೆ ನಿದ್ದೆ ಯಾವಾಗ ಹತ್ತಿತು ಎಂಬುದು ಗೊತ್ತಾಗಲಿಲ್ಲ. ಆದರೆ ಎಚ್ಚರಗೊಂಡ ಮೇಲೂ ಅದೇ ಸಾಲುಗಳು ನನ್ನನ್ನು ಇನ್ನೂ ಕಾಡುತ್ತಿವೆ.

Sunday, November 24, 2013

ಅವಧಿಯಲ್ಲಿ ನನ್ನ ಮತ್ತು ಸ್ನೇಹಿತೆ ಮಂಜುಳಳ ಢುಂಢಿ ಕುರಿತ ಅಭಿಪ್ರಾಯ 5sep-13 ರಂದು ಪ್ರಕಟಗೊಂಡಿತ್ತು...

‘ಢುಂಢಿ’ ವಿವಾದ: ಇಬ್ಬರು ವಿದ್ಯಾರ್ಥಿಗಳು ಕಂಡಂತೆ

September 5, 2013
by G
ಢುಂಢಿ ವಿವಾದಾತ್ಮಕ ಕೃತಿಯಾಗಬೇಕಿರಲಿಲ್ಲ
ಮಂಜುಳ ಹುಲಿಕುಂಟೆ
ಬದುಕು ಕಮ್ಯುನಿಟಿ ಕಾಲೇಜ್
ಯೋಗೇಶ್ ಮಾಸ್ಟರ್ ರವರ ‘ಢುಂಢಿ’ ಕೃತಿಯು ಒಂದು ವೈಚಾರಿಕ ಕೃತಿಯಾಗಿದ್ದು ಮಿಶ್ರ ಪ್ರತಿಕ್ರಿಯೆಗಳಿಗೆ ಆಸ್ಪದ ಮಾಡಿಕೊಟ್ಟಿರುವುದು ಪ್ರಜ್ಞಾವಂತರು ಗಮನಿಸಬೇಕಾದ ಅಂಶವಾಗಿದೆ. ಪ್ರಾಚೀನ ಹಿಂದೂ ಧರ್ಮ ಗ್ರಂಥಗಳಲ್ಲಿ ದೇವರಾಗಿ ಪ್ರಥಮ ಪೂಜೆ ಪಡೆಯುತ್ತಿರುವ ಗಣಪತಿಯ ಹುಟ್ಟಿನ ಬಗ್ಗೆ ಅನೇಕರಿಗೆ ಇರುವ ಅನುಮಾನ ಇಂದು ನೆನ್ನೆಯದಲ್ಲ. ಗಣಪತಿ ಎಂದರೆ ಒಂದು ಗುಂಪಿನ ನಾಯಕ ಆತ ಒಬ್ಬ ಕಾಡುಮಾನವ(ಡ್ರಾವಿಡ ವ್ಯಕ್ತಿ) ಆತನಿಂದ ದೇವಾನುದೇವತೆಯರ ಕೆಲವು ಕೆಲಸಗಳಿಗೆ ವಿಘ್ನಬರುತ್ತಿದ್ದರಿಂದ ಆತನಿಗೆ ಈ ದೈವತ್ವದ ಆಮಿಷ ಒಡ್ಡಿ ಆತನನ್ನು ಗಣಪತಿಯಾಗಿಸಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾದರು ಎಂಬುದನ್ನು. ಅನೇಕ ಬಾರಿ ಇಂತಹ ವಾದವನ್ನು ನಾನು ಕೇಳಿದ್ದೇನೆ.
ಹಾಗೆ ನೋಡಿದರೆ ಸಿದ್ದಲಿಂಗಯ್ಯ ಕಂಬಾಳುರವರ ‘ಮೈಥಿಲಿ’ ಕೂಡ ಇಂತಹದ್ದೇ ಒಂದು ವೈಚಾರಿಕ ಕೃತಿ ಇಂತಹ ಅನೇಕ ಕೃತಿಗಳು ಈಗಾಗಲೇ ಬಂದಿವೆ. ಅಂತಹದ್ದರಲ್ಲಿ ‘ಢುಂಡಿ’ ಕೃತಿಯನ್ನು ಸರಿಯಾಗಿ ಅಥರ್ೈಸಿಕೋಳ್ಳುವ ಮೋದಲೇ ಯೋಗೇಶ್ ಮಾಸ್ಟರ್ ರವರನ್ನು ಬಂಧಿಸಿದ್ದು ಸರಿಯಲ್ಲ. ಇಂತಹ ವರ್ತನೆಗಳಿಂದ ವೈಚಾರಿಕ ಮನಸ್ಸುಗಳಿಗೆ ಘಾಸಿಮಾಡುವ ಮೂದಲು ಕೃತಿಯ ಸಮಗ್ರ ಅಧ್ಯನಮಾಡಿ ಕ್ರಮ ಕೈ ಗೊಳ್ಳಬೇಕಿತ್ತು.ಇಂಥಹ ಅವಗಢಗಳ ಕುರಿತು ಪ್ರಜ್ಞಾವಂತರು ಇನ್ನಾದರೂ ಚಿಂತಿಸುವಂತಾಗಲಿ.
 

ಢುಂಢಿ ವಿಚಾರ… ವಿವಾದ…!
ಕೆ ನವೀನ್ ಕಮಾರ್
ಬದುಕು ಕಮ್ಯೂನಿಟಿ ಕಾಲೇಜು

ಭಾರತದ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅಥವ ಹೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಅವರ ಯಾವ ಅನಿಸಿಕೆ ಅಭಿಪ್ರಾಯಗಳೇ ಆಗಲಿ ಅದು ಅವರ ವೈಯಕ್ತಿಕವಾಗಿರುತ್ತದೆ ಮತ್ತು ಅದನ್ನು ಅವರು ಯಾರ ಮೇಲೂ ಬಲವಂತವಾಗಿ ಹೇರುವ ಹಾಗಿಲ್ಲ.
ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಅಭಿಪ್ರಾಯಗಳನ್ನು ತನ್ನ ಸ್ನೇಹಿತರ ಬಳಗದೊಂದಿಗೆ ಹಂಚಿಕೊಳ್ಳಬಹುದು ಹಾಗೆಯೇ ಒಬ್ಬ ಕಥೆಗಾರ ತನ್ನ ಕಥೆಗಳ ಮೂಲಕ ಮತ್ತು ಕವಿಗಳು ತಮ್ಮ ಕವಿತೆಯ ಮೂಲಕ ತಮ್ಮ ವಿಚಾರಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಅಭಿಪ್ರಾಯಗಳನ್ನು ಒಪ್ಪುವುದು ಬಿಡುವುದು ಅದನ್ನು ಕೇಳುವವರ, ಓದುವವರ ವಿವೇಚನೆಗೆ ಬಿಟ್ಟದ್ದು. ಯಾರ ಮೇಲೂ ಯಾರೂ ತಮ್ಮ ವಿಚಾರಗಳನ್ನು ಬಲವಂತಾಗಿ ಹೇರುವುದಿಲ್ಲ. ಹಾಗೆಯೇ ಇಂತಹ ವಿಚಾರಗಳನ್ನು ಪಡೆದುಕೊಳ್ಳುವವರು ಸಹ ಪ್ರತಿಕ್ರಯೆಗಳನ್ನು ನೀಡಬಹುದೇ ವಿನಹ ಯಾರ ಅಭಿವ್ಯಕ್ತಿ ಸ್ವಾತಂತ್ರಯವನ್ನೂ ಕಸಿದುಕೊಳ್ಳುವ ಹಕ್ಕು ಅವರಿಗಿರುವುದಿಲ್ಲ.
ಆದರೆ ಇತ್ತೀಚಿಗೆ ಢುಂಢಿ ಕಾದಂಬರಿ ಕುರಿತಂತೆ ಆಗುತ್ತಿರುವುದೇ ಬೇರೆ. ಢುಂಢಿಯ ಕಾದಂಬರಿಕಾರ ಯೋಗೇಶ್ ಮಾಸ್ಟರ್ ತಮ್ಮ ಕಾದಂಬರಿಯಲ್ಲಿ ಹಿಂದುಗಳ ನಂಬಿಕೆಗೆ ಚ್ಯುತಿ ತಂದಿದ್ದಾರೆ, ಅವರು ಹಿಂದು ದೇವತೆ ಶ್ರೀ ಗಣೇಶನನ್ನು ಕ್ರೂರಿ, ರಕ್ಕಸ ಎಂಬಂತೆಲ್ಲಾ ಚಿತ್ರಿಸಿದ್ದಾರೆ ಎಂದು ಹಲವು ಪ್ರತಿಭಟನೆಗಳನ್ನು ಮತ್ತು ಅವರ ವಿರುದ್ಧ ವಾಕ್ಸಮರವನ್ನು ಅನೇಕ ಹಿಂದು ಧರ್ಮ ಸಂಘಟನೆಗಳು ನಡೆಸಿದವು. ಇಲ್ಲಿಯವರೆಗೂ ಎಲ್ಲವೂ ಸರಿ ಇತ್ತೆಂದೇ ಹೇಳಬಹುದು. ಹೇಗೆ ಯೋಗೇಶ್ ಮಾಸ್ಟರ್ಗೆ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆಯೋ ಹಾಗೆಯೇ ಇತರರಿಗೂ ಅವರ ಅಭಿಪ್ರಾಯಗಳನ್ನು ತಿಳಿಯಪಡಿಸುವ ಸಾಂವಿಧಾನಿಕ ಹಕ್ಕಿದೆ.
ಆದರೆ ನಿಜವಾದ ಎಡವಟ್ಟು ಆಗಿದ್ದು ಕಾದಂಬರಿಕಾರ ಯೋಗೇಶ್ ಮಾಸ್ಟರ್ ಬಂಧನವಾದಾಗ. ಯಾವ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ಕೊಟ್ಟಿದೆಯೋ ಅದನ್ನು ನಮ್ಮ ಸಕರ್ಾರಗಳು ಕೇವಲ ಕೆಲವು ಹಿತಾಸಕ್ತಿಗಳನ್ನು ಓಲೈಸಿಕೊಳ್ಳಲು ಅಥವಾ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಕಸಿದುಕೊಳ್ಳುವುದು ಎಷ್ಟು ಸೂಕ್ತ? ಇಲ್ಲಿ ಯೋಗೇಶ್ ಮಾಸ್ಟರ್ರವರು ಏನನ್ನು ಹೇಳಿದ್ದಾರೆ ಅಥವಾ ಅವರು ಹೇಳಿರುವುದು ಯಾವ ಆಧಾರದ ಮೇಲೆ? ಎಂದು ತಿಳಿದುಕೊಂಡು ಮುಂದುವರಿದಿದ್ದರೆ ಬಹುಶ: ಇಂದು ಅವರ ಬಂಧನ ಇಷ್ಟು ದೊಡ್ಡಮಟ್ಟದ ವಿವಾದವಾಗುತ್ತಿರಲಿಲ್ಲ ಅನಿಸುತ್ತದೆ. ಒಂದೊಮ್ಮೆ ಅವರು ಇಲ್ಲಿ ಗಣೇಶನನ್ನು ಕೆಟ್ಟದಾಗಿ ಅಥವ ದುಷ್ಟ, ಕ್ರೂರಿ ಎಂದು ಚಿತ್ರಿಸಿದ್ದಾರೆಂದೇ ಅಂದುಕೊಂಡರೂ ಅದಕ್ಕೆ ಅವರು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿದ ಕೃತಿಗಳೂ ಪ್ರಭಾವ ಬೀರಿರುತ್ತವೆ. ಅಂದರೆ ಆ ಕೃತಿಗಳನ್ನೋ ಅಥವ ಕಾದಂಬರಿಯನ್ನೋ ಬೇರೆ ಇನ್ನೊಬ್ಬ ವ್ಯಕ್ತಿಯು ಬರೆದಿರುತ್ತಾನೆ. ಅಂದ ಮೇಲೆ ಅವನ ವಿರುದ್ಧ ನಡೆಯದ ಹೋರಾಟಗಳು, ಅವನ ವಿರುದ್ಧ ನಡೆಯದ ಟೀಕೆಗಳು ಕೇವಲ ಯೋಗೇಶ್ ಮಾಸ್ಟರ್ರವರ ವಿರುದ್ಧ ಮಾತ್ರ ಏಕೆ ನಡೆಯಬೇಕು?
ಯೋಗೇಶ್ರವರು ತಾವು ಕಂಡಂತೆ ಅಥವಾ ತಾವು ತಿಳಿದಂತೆ ಸಂದರ್ಭಕ್ಕನುಸಾರವಾಗಿ ಓದುಗನಿಗೆ ವ್ಯಕ್ತಿ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅದು ಒಪ್ಪುವುದು ಬಿಡುವುದು ಓದುಗನಿಗೆ ಬಿಟ್ಟದ್ದು. ಆದ್ದರಿಂದ ಕೇವಲ ತಮ್ಮ ರಾಜಕೀಯ ದಾಳಗಳನ್ನು ಉಳಿಸಿಕೊಳ್ಳಲು ಮತ್ತು ಬಿಟ್ಟಿ ಪ್ರಚಾರಕ್ಕಾಗಿ ತಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವ ಹುಂಬತನವನ್ನು ಈ ಸೋಕಾಲ್ಡ್ ಸಂಘಟನೆಗಳು ಇಲ್ಲಿಗೇ ನಿಲ್ಲಿಸಿ, ನಿಜವಾದ ಸಮಾಜ ಸುಧಾರಣೆಯಲಿ ತೊಡಗಿಕೊಂಡರೆ ಎಲ್ಲ ಸಮುದಾಯ, ಸಮಾಜದವರಿಗೂ ಒಳಿತಾದೀತು.

ನವೀನ್ ಕುಮಾರ್
ಇನ್ನಾದರೂ ನನ್ನನ್ನು ನನ್ನ ಇಚ್ಛೆಯಂತೆ ಬದುಕಲು ಬಿಡಿ… ಇದು ಆ ಮುದಿ ಜೀವದ ಎಷ್ಟೋ ವರ್ಷಗಳ ಕೂಗು. ಆದರೆ ಕೇಳುವರಾರು? ಎಂಬುದೇ ಆಕೆಯ ಪ್ರಶ್ನೆ. ಜೀವನದ ಕಷ್ಟ ಸುಖಗಳನ್ನು ಕೊನೆವರೆಗೂ ಹಂಚಿಕೊಳ್ಳುತ್ತೇನೆ ಎಂದು ಕೈ ಹಿಡಿದ ಗಂಡ ಅರ್ಧದಲ್ಲೇ ತನ್ನ ಪಯಣವನ್ನು ಮುಗಿಸಿ ನಡುನೀರಿನಲ್ಲಿ ಕೈ ಬಿಟ್ಟು ಹೋಗಿದ್ದ. ಇನ್ನು ಮಕ್ಕಳೋ, ಅವರ ಲೋಕ ಅವರದು. ನಿಷ್ಟ್ರಯೋಜಕರೇನಲ್ಲ. ಆದರೆ ಪ್ರಯೋಜಕರು ಎಂದು ಹೇಳಿಕೊಳ್ಳುವ ಮಟ್ಟಕ್ಕೂ ಇನ್ನು ಬೆಳೆದಿಲ್ಲ. ತಮ್ಮ ಜೀವನವನ್ನು ಸಾಗಿಸುವ ಸಾಮಥ್ರ್ಯವಿದೆ, ಆದರೆ ಇನ್ನು ಜೀವನವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹುಡುಗಾಟಿಕೆ ಬಿಟ್ಟಿಲ್ಲ, ಹೀಗೆಯೇ ಈಸಿ ಚೇರ್ನಲ್ಲಿ ಕುಳಿತು ಏನೇನೋ ಯೋಚಿಸುತ್ತಿದ್ದ ಆಕೆಗೆ ಯಾರೋ ಬಾಗಿಲು ಬಡಿದ್ದದ್ದು ಕೇಳಿ ಎಚ್ಚರವಾಯಿತು. ಯಾರಿರಬಹುದು ಎಂದು ಗೊಣಗಿಕೊಳ್ಳುತ್ತಲೇ ಕುಳಿತಲ್ಲಿಂದ ಎದ್ದು ಬಂದು ಬಾಗಿಲು ತೆರೆದಾಕೆಗೆ ಎದುರಿಗೆ ಕಂಡದ್ದು ಪೋಸ್ಟ್ಮಾನ್. ಅವನು ನೀಡಿದ ಒಂದು ಲಕೋಟೆಯನ್ನು ಪಡೆದು ಮತ್ತೆ ಬಾಗಿಲು ಮುಚ್ಚಿ ತನ್ನ ಆರಾಮ ಕುರ್ಚಿಯಲ್ಲಿ ಕುಳಿತು ಯೋಚಿಸತೊಡಗಿದಳು.
ಹಾಗೆಯೇ ಕಣ್ಣು ಮುಚ್ಚುತ್ತಿದ್ದಂತೆ ಅವಳೆದುರಿಗೆ ತನ್ನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲ ಘಟನೆಗಳೂ ಸಿನಿಮಾ ರೀಲಿನಂತೆ ಎದುರಿಗೆ ಬರತೊಡಗಿದವು. ಇನ್ನೂ ಹತ್ತನೇ ತರಗತಿ ಪಾಸಾಗಿರಲಿಲ್ಲ, ವಯಸ್ಸು ಹದಿನಾರು ಕೂಡ ದಾಟಿರಲಿಲ್ಲ. ಆಗಲೇ ಮನೆಯಲ್ಲಿ ಮದುವೆಯ ಒತ್ತಡ ಶುರುವಾಗಿತ್ತು. ಅದು ಹೇಗೋ ಕಾಡಿ ಬೇಡಿ, ರಂಪ ಮಾಡಿ, ಉಪವಾಸವಿದ್ದು ಏನೇನೋ ಕಷ್ಟಪಟ್ಟು ಅಂತೂ ಮದುವೆಯ ಪ್ರಸ್ತಾಪಗಳನ್ನು ನಿಲ್ಲಿಸಿದ್ದಾಯಿತು. ಓದು ಮುಂದುವರೆಸಲೂ ಪಟ್ಟ ಕಷ್ಟ ಅಷ್ಟಿಷ್ಟೇನಲ್ಲ. ಶಾಲೆಯಲಿ ಮಾಸ್ತರ್ ಆಗಿ ಕೆಲಸ ಮಾಡುತಿದ್ದ ಅಣ್ಣನೂ ತನ್ನ ಓದಿಗೆ ಬೆಂಬಲ ಕೊಡದೇ, ಹೆಣ್ಣು ಹುಡುಗಿಯರಿಗೇಕೆ ಹೆಚ್ಚಿನ ಓದು, ಮದುವೆ ಮಾಡಿಕೊಂಡು ಹೋಗೋದು ಬಿಟ್ಟು, ಎಂದು ಬೈಯೋದು. ಆದರೂ ತನ್ನ ಓದುವ ಆಸೆಗೆ ಇತಿಶ್ರೀ ಹಾಡದೆ, ಹೇಗೋ ಮನೆಯವರನ್ನು ಒಪ್ಪಿಸಿ ಓದು ಮುಂದುವರೆಸಿದ್ದು, ದೊಡ್ಡ ಸಾಹಸವೇ ಆಗಿತ್ತು. ಅಂತೂ ಹೇಗೋ ಎಸ್.ಎಸ್.ಎಲ್.ಸಿ. ಪಾಸ್ ಮಾಡಿಕೊಂಡು ಪಿ.ಯು.ಸಿ ಮೆಟ್ಟಿಲು ಏರಿದಾಗ ಆದ ಸಂತೋಷ ಅಷ್ಟಿಷ್ಟಲ್ಲ.
ಪಿ.ಯು. ಮೊದಲ ವರ್ಷ ಮುಗಿಯುತ್ತಿದ್ದಂತೆ ಮತ್ತೆ ಮನೆಯವರಿಂದ ಮದುವೆಯ ಕ್ಯಾತೆ. ತನಗೋ ಈಗಲೇ ಮದುವೆಯಾಗುವ ಆಲೋಚನೆಗಳೇ ಇಲ್ಲ. ಇನ್ನೂ ಓದಬೇಕು. ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಆಸೆ. ಆದರೆ ಮನೆಯಲ್ಲಿ ಇದಕ್ಕೆ ಬೆಂಬಲ ಕೊಡುವವರ್ಯಾರು? ಆಗಲೇ ಹೈಸ್ಕೂಲ್ ಓದುವಾಗ ಕಲಿತ ಟೈಪ್ರೈಟಿಂಗ್ ನೆರವಿಗೆ ಬಂದದ್ದು. ಯಾವುದೋ ಸರ್ಕಾರಿ ಕಛೇರಿಯಲ್ಲಿ ದಿನಗೂಲಿ ನೌಕರಳಾಗಿ ಕೆಲಸ ಮಾಡುತಿದ್ದ ಗೆಳತಿಯೊಬ್ಬಳು ಅದೇ ಕಛೇರಿಯಲ್ಲಿ ಟೈಪಿಸ್ಟ್ನ ಅವಶ್ಯಕತೆ ಇದೆ ಎಂದಾಗ ಆಕೆ ತನಗೆ ಸಾಕ್ಷಾತ್ ವರಮಹಾಲಕ್ಷ್ಮಿಯಂತೆಯೇ ಕಂಡಿದ್ದಳು. ಖುಷಿಯಿಂದ ಮನೆಗೆ ಹೋಗಿ ವಿಷಯ ಹೇಳಿದರೆ ಹೆಣ್ಣು ಮಗಳು, ಅದರಲ್ಲೂ ಬ್ರಾಹ್ಮಣರ ಮನೆ ಹುಡುಗಿ ಹೊರ ಹೋಗಿ ದುಡಿಯುವುದೇ? ಸಾಧ್ಯವೇ ಇಲ್ಲ ಎಂದು ಅಪ್ಪ ಖಡಾಖಂಡಿತವಾಗಿ ಹೇಳಿದ್ದು ಕೇಳಿ ತನ್ನ ಆಸೆಯಲ್ಲಕ್ಕೂ ತಣ್ಣೀರೆರಚಿದಂತಾಗಿತ್ತು. ಆದರೂ ಪಟ್ಟು ಬಿಡದೆ, ಕಾಡಿ ಬೇಡಿ ತನ್ನ ಸ್ನೇಹಿತೆಯಿಂದಲೂ ಹೇಳಿಸಿ ಅದು ಹೇಗೋ ಅಪ್ಪನನ್ನು ಒಪ್ಪಿಸುವುಷ್ಟರಲ್ಲಿ ಸಾಕುಬೇಕಾಗಿತ್ತು. ಒಪ್ಪಿಕೊಂಡರೂ ಅಪ್ಪ ಸುಮ್ಮನೆ ಒಪ್ಪಿದ್ದರೆ. ನೂರೊಂದು ಕಂಡೀಷನ್ಗಳು. ಇಷ್ಟೊತ್ತಿಗೆ ಮುಂಚೆ ಬರಲು ಸಾಧ್ಯವಿಲ್ಲ. ಸಂಜೆ ಐದು ಗಂಟೆಗೆಲ್ಲಾ ಮನೆಯಲ್ಲಿರಬೇಕು. ಒಬ್ಬಳೇ ಹೋಗೋ ಹಾಗಿಲ್ಲ. ಅದು ಇದು ಏನೇನೋ ಹೇಳಿದ್ದಾವುದೂ ನನ್ನ ಕಿವಿಗೇ ಬಿದ್ದಿರಲಿಲ್ಲ. ಇನ್ನಾದರೂ ನನಗೆ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿತಲ್ಲ ಎಂಬ ಖುಷಿಯೊಂದೇ ಇದ್ದದ್ದು.

ಮೊದಲ ದಿನ ಕೆಲಸಕ್ಕೆ ಹೋದಾಗ ಆದ ಆನಂದ ಅಷ್ಟಿಷ್ಟಲ್ಲ. ಆದರೆ ಬರಬರುತ್ತಾ ಅಲ್ಲೂ ಒತ್ತಡಗಳಿದ್ದವು. ಜೊತೆಗೆ ಅರ್ಧಕ್ಕೆ ನಿಲ್ಲಿಸಿದ ಓದನ್ನೂ ಮುಂದುವರೆಸಿದ್ದು. ಹೇಗೋ ಎಲ್ಲವನ್ನೂ ಸರಿದೂಗಿಸಿಕೊಂಡು ಕೊನೆಗೂ ಒಂದು ಡಿಗ್ರಿ ಅಂತ ಪಡೆದುಕೊಂಡದ್ದಾಯಿತು. ಮಾಡುತಿದ್ದದ್ದು ಸಕರ್ಾರಿ ಕಛೇರಿಯ ಕೆಲಸವೇ ಆದರೂ ದಿನಗೂಲಿ ನೌಕರಳಾಗಿ. ಓದು ಮುಗಿಯಿತು ಈಗಲಾದರೂ ಮದುವೆ ಮಾಡಿಕೋ ಎಂಬ ಮಾತುಗಳು ಮತ್ತೆ ಮನೆಯಲ್ಲಿ ಕಿರಿಕಿರಿಯನ್ನುಂಟು ಮಾಡಲಾರಂಭಿಸಿದವು. ಕೊನೆಗೂ ಹೇಗೋ ಸರಿ ಎಂದು ಒಪ್ಪಿಕೊಂಡೆ. ಅಷ್ಟೊತ್ತಿಗಾಗಲೇ ಅಣ್ಣ ನಮ್ಮಿಂದ ದೂರಾಗಿದ್ದ. ತನ್ನ ಸಂಸಾರದೊಂದಿಗೆ ಬೇರೆ ಬದುಕುತಿದ್ದ. ಅಪ್ಪ, ಅಮ್ಮನನ್ನು ಒಂಟಿಯಾಗಿ ಬಿಟ್ಟು ಹೋಗುವ ಮನಸಿಲ್ಲ. ಆದರೆ ಮದುವೆಯ ಒತ್ತಡ ಇದ್ದದ್ದೇ ಅವರಿಂದ, ಅದಕ್ಕೇ ಒಪ್ಪಿಕೊಂಡದ್ದಾಯಿತು. ಎರಡು ಮೂರು ಸಂಬಂಧಗಳು ಬಂದರೂ ಯಾವುದೂ ಒಪ್ಪಿಗೆಯಾಗಿರಲಿಲ್ಲ. ಸರಿ, ಸ್ವಲ್ಪದಿನ ಇದನ್ನೆಲ್ಲಾ ನಿಲ್ಲಿಸಿ ಎಂದು ಹೇಳೋಣ ಎಂದುಕೊಳ್ಳುತ್ತಿರುವಾಗಲೇ ಅಪ್ಪನಿಗೆ ಪಾಶ್ರ್ವವಾಯು ಬರಸಿಡಿಲಿನಂತೆ ಬಂದೆರಗಿತ್ತು. ಅಮ್ಮನಿಗೂ ವಯಸ್ಸಾಗಿತ್ತು ಬೇರೆ. ಮನೆ ಕೆಲಸ, ಆಫೀಸ್, ಅಪ್ಪನ ಆರೋಗ್ಯ ಇವುಗಳಲ್ಲಿ ಮದುವೆಯ ವಿಚಾರವನ್ನು ತಾನೂ ಮರೆತುಬಿಟ್ಟಳು, ಮನೆಯಲ್ಲೂ ಯಾರೂ ಅದರ ಬಗ್ಗೆ ಮಾತನಾಡಲಿಲ್ಲ. ಹೇಗೋ ಎರಡು ವರ್ಷ ಕಳೆಯುವಷ್ಟರಲ್ಲಿ ತೀರ ನಿಶಕ್ತನಾಗಿದ್ದ ಅಪ್ಪನೂ ಅಗಲಿಹೋದ. ಈಗ ಅಮ್ಮನ ಮತ್ತು ಮನೆಯ ಸಂಪೂರ್ಣ ಜವಾಬ್ದಾರಿ ತನ್ನ ಮೇಲೇಯೇ ಬಿದ್ದಿತ್ತು. ಆದರೆ ಈಗ ಅಮ್ಮ ಮದುವೆಯ ಜಪ ಮಾಡಲು ಶುರುವಿಟ್ಟಿದ್ದಳು.
ಸರಿ ಎಂದು ಒಪ್ಪಿಕೊಂಡೆ. ಒಂದೆರಡು ವರ್ಷಗಳಲ್ಲಿ ಮದುವೆಯೂ ಆಯಿತು. ಗಂಡನಿಗೆ ನನ್ನೂರಲ್ಲೇ ಕೆಲಸ ಸಿಕ್ಕದ್ದು, ನಾನು ಮನೆಯಿಂದ ದೂರವಾಗದಂತೆ ಮಾಡಿದ್ದೊಂದೇ ಆಗ ನನಗೆ ಖುಷಿಕೊಟ್ಟ ವಿಚಾರ ಅನಿಸುತ್ತದೆ. ಅಷ್ಟೊತ್ತಿಗಾಗಲೇ ಅಣ್ಣನೂ ವಾಪಾಸ್ ಬಂದಿದ್ದ. ನನ್ನ ಸಂಸಾರ, ಜೊತೆಗೆ ಅಮ್ಮನ ಆರೋಗ್ಯ, ಕೆಲಸ, ಮದುವೆಯಾದ ನಾಲ್ಕು ವರ್ಷಗಳಲ್ಲೇ ಎರಡು ಮಕ್ಕಳು, ಅವರ ಆರೈಕೆ ಇದೇ ನಿತ್ಯ ಕಾಯಕದಂತಾಗಿ ಹೋಗಿತ್ತು. ಇವುಗಳ ಮಧ್ಯೆ ಮತ್ತೊಂದು ಸಂತೋಷದ ಸಂಗತಿಯೆಂದರೆ ಸುಮಾರು ವರ್ಷಗಳ ನಂತರ ತನ್ನನ್ನು ಖಾಯಂ ನೌಕರಳಾಗಿ ಪರಿಗಣಿಸಿರುವ ಆದೇಶ ಬಂದದ್ದು. ಆಗಲೇ ತನ್ನ ಜೀವನಕ್ಕೆ ಒಂದು ನೆಲೆ ಸಿಕ್ಕಿದೆ ಎಂಬ ಭಾವ ಮತ್ತು ತಾನು ಅಂದುಕೊಂಡದ್ದನ್ನು ಸಂಪೂರ್ಣವಾಗಲ್ಲದ್ದಿದ್ದರೂ ಕೊಂಚಮಟ್ಟಿಗೆ ಸಾಧಿಸಿದ್ದೇನೆಂಬ ಭಾವ ಮೂಡಿತ್ತು. ಆದರೆ ಈಗಲೂ ತಾನಂದುಕೊಂಡ ಸ್ವಾತಂತ್ರ್ಯ ತನಗೆ ಸಿಕ್ಕಿರಲಿಲ್ಲ. ಜೀವನದ ಜಂಜಾಟಗಳೇನೂ ತಪ್ಪಿರಲಿಲ್ಲ. ಸಂಸಾರದ ಒತ್ತಡಗಳು, ಮಕ್ಕಳ ಓದು ಅವರ ಆರೋಗ್ಯ ಹೀಗೆ ಈಗಲೂ ತನ್ನ ಜೀವನವನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎನಿಸುತಿತ್ತು. ಸರಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಬಾಳತೊಡಿಗಿದೆ. ಮಕ್ಕಳೂ ಬೆಳೆದು ದೊಡ್ಡವರಾಗುತ್ತಿದ್ದರು. ಆಗ ಮತ್ತೊಂದು ಆಘಾತ, ಕೊನೆಯವರೆಗೂ ಜೊತೆಗಿರಬೇಕಾದವನು ಮಧ್ಯದಲ್ಲೇ ತನ್ನ ಜೀವನದ ಆಟ ಮುಗಿಸಿಹೋಗಿದ್ದ. ಆದರೆ ಧೃತಿಗೆಡುವ ಹಾಗಿಲ್ಲ. ಮಕ್ಕಳ ಭವಿಷ್ಯ ರೂಪಿಸಬೇಕು. ಅವರು ಒಂದು ನೆಲೆಯನ್ನು ಕಂಡುಕೊಳ್ಳುವವರೆಗೂ ತಾನು ಧೈರ್ಯದಿಂದರಬೇಕು, ಕಷ್ಟ ಪಡಲೇಬೆಂಬ ಛಲ ಹೇಗೋ ಇಲ್ಲಿಯವರೆಗೂ ನೂಕಿಸಿಕೊಂಡು ಬಂದಿದೆ. ಈಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಅವರೂ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ನಿರ್ವಹಣೆಗೆ ಬೇಕಾಗುವಷ್ಟು ಸಂಪಾದನೆಯನ್ನೂ ಮಾಡುತ್ತಿದ್ದಾರೆ.
ಈಗ ತಾನು ಒಂದಷ್ಟು ಸ್ವತಂತ್ರಳು. ಯಾರಿಗಾಗಿಯೋ, ಯಾರ ಅಧೀನದಲ್ಲೋ ಬದುಕುವ ಜರೂರು ಇನ್ನು ತನಗಿಲ್ಲ. ಇನ್ನಾದರೂ ಸ್ವೇಚ್ಛೆಯಿಂದ ಬದುಕಬೇಕು, ನಾನು ಬೇಕೆಂದುಕೊಂಡಿದ್ದ ಸ್ವಚ್ಛ ಗಾಳಿಯ ಆಹ್ಲಾದವನ್ನು ಸವಿಯಬೇಕು ಎಂದುಕೊಳ್ಳುತ್ತಿದ್ದವಳಿಗೆ, ಅಮ್ಮ ಹೊಟ್ಟೆ ಹಸಿಯುತ್ತಿದೆ, ಊಟಕ್ಕೆ ಬಡಿಸು ಎಂಬ ಕೂಗು ತನ್ನ ಆಲೋಚನೆಯ ಲೋಕದಿಂದ ಹೊರ ಬರುವಂತೆ ಮಾಡಿತ್ತು. ಮಗ ಊಟಕ್ಕೆ ಬಂದನೆಂದು ಅವನಿಗೆ ಬಡಿಸಲು ಎದ್ದವಳಿಗೆ ಮತ್ತೆ ಕಾಡಿದ್ದು, ನಿಜಕ್ಕೂ ನಾನೀಗ ಸ್ವತಂತ್ರಳೇ? ಎಂಬ ಪ್ರಶ್ನೆ. ಮತ್ತೆ ಮನದಾಳದಿಂದ ಹೊರ ಬಂದ ಕೂಗು, ‘ಇನ್ನಾದರೂ ನನ್ನನ್ನು ನನ್ನ ಇಚ್ಛೆಯಂತೆ ಬದುಕಲು ಬಿಡಿ’……

Monday, August 12, 2013

ಬದುಕು ಬಂಜರು ಭೂಮಿಯಲ್ಲ!



§zÀÄPÀÄ §AdgÀÄ ¨sÀÆ«ÄAiÀÄ®è!

¸ÁªÀÅ JµÀÄÖ ¨sÀAiÀÄAPÀgÀ JA§ÄzÀ£ÀÄß CzÀgÀ ¸À«ÄÃ¥ÀPÉÌ ºÉÆÃV ªÀÄgÀ½ §AzÀªÀgÀ£ÀÄß PÉýzÀgÉ CxÀªÁ D AiÀiÁvÀ£ÉAiÀÄ£ÀÄß C£ÀĨsÀ«¹zÀªÀgÀ£ÀÄß PÉýzÀgÉ CzÀgÀ ©üÃPÀgÀvÉAiÀÄ£ÀÄß ªÀÄ£ÀzÀmÁÖUÀĪÀAvÉ ºÉýAiÀiÁgÀÄ.  DzÀgÉ E£ÀÆß K£À£ÀÆß C£ÀĨsÀ«¸ÀzÀ, fêÀ£À JAzÀgÉ K£ÀÆ CAvÀ¯Éà CjAiÀÄzÀ ªÀÄÄUÀÞ fêÀUÀ¼ÀÄ AiÀiÁªÀ CAfPÉAiÀÄÆ E®èzÉ ªÀÄÈvÀÄå zÉêÀvÉAiÀÄ£ÀÄß ©VzÀ¦à §gÀªÀiÁrPÉƼÀÄîwÛgÀĪÀÅzÀ£ÀÄß £ÉÆÃrzÀgÉ CªÀgÀ ¸ÁºÀ¸À zsÉÊAiÀÄðUÀ¼À£ÀÄß ªÉÄZÀѨÉÃPÉÆà CxÀªÀ zÉñÀzÀ ¨sÀ«µÀå F jÃw £À²¹ ºÉÆÃUÀÄwÛzÉ JAzÀÄ zÀÄ:T͸À¨ÉÃPÉÆà w½AiÀÄzÀAvÁVzÉ.

CAvÀeÁð®zÀ°è ªÀiÁ»wAiÀÄ£ÀÄß ©vÀÛj¸ÀĪÀ «Q¦ÃrAiÀiÁªÀ£ÀÄß DzsÀj¹ ºÉüÀĪÀÅzÁzÀgÉ dUÀwÛ£À°è ¥ÀæwªÀµÀð CzsÀð «Ä°AiÀÄ£ï DvÀäºÀvÁå ¥ÀæPÀgÀtUÀ¼ÀÄ zsÁR¯ÁUÀÄwÛzÀÄÝ EzÀgÀ°è ±ÉÃPÀqÀ 20gÀµÀÄÖ ¨sÁgÀvÀzÀ AiÀÄĪÀd£ÀvÉAiÉÄà EzÁÝgÉ JA§ÄzÀÄ ¸ÀàµÀÖªÁUÀÄvÀÛzÉ.  PÀ¼ÉzÀ JgÀqÀÄ zÀ±ÀPÀUÀ¼À°è, CzÀgÀ®Æè ªÀÄÄRåªÁV zÀQët ¨sÁgÀvÀzÀ°è ¥Àæw MAzÀÄ ®PÀëªÀÄA¢UÉ ±ÉPÀqÀ 7.9 gÀ¶ÖzÀÝ DvÀäºÀvÉå ¥ÀæPÀgÀtUÀ¼ÀÄ ±ÉÃPÀqÀ 10.3PÉÌ KjgÀĪÀÅzÀÄ «µÁzÀ¤ÃAiÀÄ.  CzÀgÀ®Æè dÆ£ï 2012gÀ°è ``¢ ¯Áå¸ÉAmï'' ¤ÃrzÀ ªÀgÀ¢AiÀÄ£ÀÄß UÀªÀĤ¹zÀgÉ 2010gÀ°è PÉêÀ® ¨sÁgÀvÀzÀ°è ªÀiÁvÀæ ¸ÀĪÀiÁgÀÄ 1,87,000 d£À DvÀäºÀvÉå ªÀiÁrPÉÆArzÁÝgÉ.  EªÀgÀ°è ºÀ¢£ÉÊzÀjAzÀ E¥ÀàvÉÆÛA§vÀÄÛ ªÀAiÀĹ£À AiÀÄĪÀ d£ÀgÉà ºÉZÀÄÑ EgÀĪÀÅzÀÄ aAvÉVÃqÀÄ ªÀiÁqÀĪÀ ºÁUÀÆ UÀA©üÃgÀªÁV D¯ÉÆÃa¸ÀĪÀAvÉ ªÀiÁqÀĪÀ «µÀAiÀÄ JA§ÄzÀgÀ°è ¸ÀA±ÀAiÀÄ«®è.

C®èzÉ dÆ£ï 25, 2013gÀ ªÀgÀ¢AiÀÄ£ÀÄß UÀªÀĤ¹zÀgÉ £ÁåµÀ£À¯ï PÉæöÊA gÉPÁqïìð §ÆågÉÆà ©qÀÄUÀqÉUÉƽ¹zÀ CAQ-CA±ÀUÀ¼À ¥ÀæPÁgÀ PÀ¼ÉzÀ ªÀµÀð 1,35,445 d£À DvÀäºÀvÀåUÉ ±ÀgÀuÁVzÀÄÝ EzÀgÀ°è ¥À²ÑªÀÄ §AUÁ¼À ºÉÆgÀvÀÄ ¥Àr¹ 79,773 ¥ÀÄgÀĵÀgÀÄ ºÁUÀÆ 40,715 ªÀÄ»¼ÉAiÀÄgÀÄ DvÀäºÀvÉå ªÀiÁrPÉÆArzÁÝgÉ.  E£ÀÄß §AUÁ¼ÀzÀ°è ¥ÀÄgÀĵÀ ªÀÄvÀÄÛ ªÀÄ»¼ÉAiÀÄgÀ£ÀÄß MlÄÖUÀÆr¹ 14,957 DvÀäºÀvÉåAiÀÄ ¥ÀæPÀgÀt ¨É¼ÀQUÉ §A¢zÉ.  E£ÀÄß EzÉà J£ï.¹.Dgï.©. ªÀgÀ¢AiÀÄAvÉ 2011gÀ°è 1,35,585 DvÀäºÀvÀåUÀ¼ÀÄ ¨sÁgÀvÀzÀ°è DVgÀĪÀÅzÀÄ ¨É¼ÀQUÉ §A¢zÉ.

F DvÀäºÀvÉåUÀ½UÉ C£ÉÃPÀ PÁgÀtUÀ¼À£ÀÄß ¸ÀºÀ PÉÆqÀ§ºÀÄzÀÄ.  C£ÉÃPÀgÀÄ vÀªÀÄä DyðPÀ ¸ÀªÀĸÉåUÀ¼À£ÀÄß JzÀÄj¸À¯ÁUÀzÉ EAvÀºÀ PÀÈvÀåUÀ½UÉ ªÀÄÄAzÁzÀgÉ E£ÀÄß PÉ®ªÀgÀÄ ªÀiÁ£À¹PÀ ¸ÀªÀÄvÉÆî£ÀªÀ£ÀÄß PÀ¼ÉzÀÄPÉÆAqÀÄ DvÀäºÀvÉåUÉ ±ÀgÀuÁUÀÄvÁÛgÉ.  EªÀ®èzÉ PËlÄA©PÀ QgÀÄPÀļÀ, gÉÊvÀgÀ ¸ÀªÀĸÉåUÀ¼ÀÄ, CvÁåZÀgÀPÉÆ̼ÀUÁV ªÀÄÄA¢£À ¥Àj¹ÜwUÀ¼À£ÀÄß JzÀÄj¸À¯ÁUÀzÉ T£ÀßvɬÄAzÀ DvÀäºÀvÉå ªÀiÁrPÉƼÀÄîªÀªÀgÀ ¸ÀASÉåAiÀÄÆ ºÉZÁÑUÀÄvÁÛ EgÀĪÀÅzÀÄ UÀªÀÄ£ÁºÀð.  EAvÀºÀ PÀÈvÀåUÀ½UÉ AiÀÄĪÀ d£ÀvÉ ªÀÄÄAzÁUÀ®Ä CªÀgÀ ªÉÄðgÀĪÀ CwAiÀiÁzÀ ¸ÁªÀiÁfPÀ, ¨sÁªÀ£ÁvÀäPÀ ºÁUÀÆ DyðPÀ MvÀÛqÀUÀ¼ÀÄ JAzÀgÉ vÀ¥ÁàUÀ¯ÁgÀzÀÄ. 

EªÉ¯Áè MAzÉqÉAiÀiÁzÀgÉ EwÛÃaUÉ «zÁåyðUÀ¼ÀÄ EAvÀºÀ PÀÈvÀåUÀ½UÉ ºÉZÁÑV §°AiÀiÁUÀÄwÛgÀĪÀÅzÀÄ.  PÉ® ¢£ÀUÀ¼À »AzÀµÉÖà ¥ÀæPÀlUÉÆAqÀ ¸ÀÄ¢ÝAiÀÄ£ÀÄß UÀªÀĤ¹zÀgÉ, ¨ÉAUÀ¼ÀÆj£À ¥É¹mï PÁ¯ÉÃf£À «zÁåyð ``ªÀgÀÄuï gÀ«'' ¥ÀÄmÉÖãÀºÀ½î PÉgÉAiÀÄ ¸À«ÄÃ¥À ªÀÄgÀPÉÌ £ÉÃtÄ ©VzÀÄPÉÆAqÀÄ DvÀäºÀvÉå ªÀiÁrPÉÆArzÁÝ£É.  CªÀ£À ¸Á«UÉ PÁgÀt K£ÉAzÀÄ E£ÀÄß w½zÀÄ §A¢®è ªÀÄvÀÄÛ ªÀÄÈvÀ£À ºÀwÛgÀ AiÀiÁªÀÅzÉà jÃwAiÀÄ ¸ÀƸÉÊqï £ÉÆÃmï ¸ÀºÀ zÉÆgÀPÀzÉà EgÀĪÀÅzÀÄ C£ÀĪÀiÁ£À¸ÀàzÀªÁVzÀÝgÀÆ CzÀÄ ªÉÄïÉÆßÃlPÉÌ DvÀäºÀvÉåAiÀÄAvÉAiÉÄà UÉÆÃZÀj¸ÀÄwÛzÉ.  F jÃwAiÀiÁV CgÀ¼ÀĪÀ ªÀÄÄAZÉAiÉÄà WÀªÀÄ ¸ÀƸÀ¨ÉÃPÁzÀ ºÀÆUÀ¼ÀÄ ¨Ár ºÉÆÃUÀÄwÛgÀĪÀÅzÀÄ zÀÄ:RPÀgÀ ¸ÀAUÀw.  EzÀPÉÌ PÁgÀtUÀ¼À£ÀÄß ºÀÄqÀÄPÀÄvÁÛ ºÉÆgÀlgÉ ªÉÆzÀ®Ä £ÀªÀÄä PÀtÚ ªÀÄÄAzÉ §AzÀÄ ¤®ÄèªÀÅzÉà EªÀgÀÄUÀ¼À ªÉÄðgÀĪÀ CwAiÀiÁzÀ MvÀÛqÀ.  ¥ÉÆõÀPÀjAzÀ, ²PÀëPÀjAzÀ, §AzsÀÄ §¼ÀUÀzÀªÀjAzÀ, ¸ÉßûvÀjAzÀ »ÃUÉ J¯ÉèqɬÄAzÀ PÉêÀ® «zÉåUÀµÉÖà ¸ÀA§A¢ü¸ÀzÉ ¨ÉÃgÉ ¨ÉÃgÉ PÁgÀtUÀ½AzÀ ºÉZÁÑUÀĪÀ MvÀÛqÀzÀ ¥Àj¹ÜwUÀ¼À£ÀÄß JzÀÄj¸À¯ÁUÀzÉ ªÀiÁ£À¹PÀ ¸ÉÜöÊAiÀÄð PÀ¼ÉzÀÄPÉÆAqÀÄ, PÀÄVÎ ºÉÆÃV F jÃwAiÀÄ ¤tðAiÀÄUÀ¼À£ÀÄß vÉUÉzÀÄPÉƼÀÄîwÛgÀĪÀÅzÀÄ ¸ÁªÀiÁ£ÀåªÁVzÉ.  PÉ®ªÀgÀÄ ¥ÀjÃPÉëAiÀÄ°è ¥sÉïï DzÀ PÁgÀt ¤Ãr ¸Á«UÉ ±ÀgÀuÁzÀgÉ E£ÀÄß PÉ®ªÀgÀÄ ¦æÃw ¥ÉæêÀÄzÀ vÉƼÀ¯ÁlzÀ°è ¹®ÄQ ªÀÄÈvÀÄå«UÉ PÉÆgÀ¼ÉÆqÀÄØwÛzÁÝgÉ.  EzÀÄ »ÃUÉAiÉÄà ªÀÄÄAzÀĪÀjzÀgÉ §ºÀıÀ: ªÀÄÄAzÉÆAzÀÄ ¢£À AiÀÄĪÀ ¦Ã½UÉ DvÀäºÀvÀåUÉ ¥ÀæwÃPÀªÁV ¤®ÄèªÀ ¸ÀAzÀ¨sÀð §AzÉÆzÀVzÀgÉ CZÀÑjAiÉÄä®è.

CAzÀgÉ EzÀPÉÌ ¥ÀjºÁgÀªÉà E®èªÉÃ?  RArvÀ EzÉ.  AiÀiÁªÀ PÁgÀtUÀ¼À£ÀÄß ¤Ãr PÉ®ªÀgÀÄ ¸ÁAiÀÄÄwÛzÁÝgÉÆà CzÉà ¸ÀªÀĸÀåUÀ¼À£ÀÄß CxÀªÁ CzÀQÌAvÀ®Æ UÀA©üÃgÀ ¸ÀªÀĸÀåUÀ¼À£ÀÄß zsÉÊAiÀÄð¢AzÀ, ¢lÖvÀ£À¢AzÀ JzÀÄj¹ AiÀıÀ¹ì£À ºÁ¢AiÀÄ°è ¸ÁVzÀ, ¸ÁUÀÄwÛgÀĪÀ C£ÉÃPÀ GzÁºÀgÀuÉUÀ¼ÀÆ £ÀªÀÄä ªÀÄÄA¢ªÉ.  §ºÀ¼À »AzÀPÉÌ ºÉÆÃUÀzÉ EwÛÃa£À PÉ® ¢£ÀUÀ¼À »AzÀµÉÖà C£ÉÃPÀ PÀµÀÖUÀ¼À£ÀÄß JzÀÄj¹ CzÀgÀ®Æè ªÉñÁåªÁnPÉAiÀÄ vÀªÀgÀÆgÀAwgÀĪÀ ªÀÄÄA¨ÉÊ£À gÉqï ¯ÉÊmï KjAiÀiÁ PÁªÀiÁn¥ÀÄgÀ JA§ PÀÆ¥À¢AzÀ ºÉÆgÀ§AzÀÄ ºÉaÑ£À «zÁå¨sÁå¸ÀPÁÌV CªÉÄÃjPÉUÉ ºÁjzÀ PÉêÀ® ºÀ¢£ÉAlgÀ ºÀgÉAiÀÄzÀ ¢lÖ ºÀÄqÀÄV ``±ÉéÃvÀ PÀnÖAiÀÄ'' ªÀÄ£ÉÆç®PÉÌ ±ÀºÀ¨Áâ¸ï ºÉüÀ¯ÉèÉÃPÀÄ.  vÀªÀÄä PÀµÀÖUÀ¼À£ÀÄß ¤ÃV¹PÉƼÀî¯ÉÆà CxÀªÁ E£ÁågÀzÉÆà zÀ¨Áâ½PÉUÉ M¼ÀUÁV ¢£À ¤vÀå ªÉÄÊ ªÀiÁjPÉÆAqÀÄ §zÀÄPÀÄ £ÀqɸÀĪÀ d£ÀUÀ¼À ªÀÄzsÉå C°èAiÀÄ PÀµÀÖ PÁ¥ÀðtåUÀ¼À£ÀÄß £ÉÆÃqÀĪÀÅzÀ®èzÉ RÄzÀÄÝ vÁ£ÀÆ C£ÀĨsÀ«¸ÀÄvÁÛ, CµÉÖà KPÉ ¸ÀévÀºÀ vÀ£Àß vÀAzÉAiÉÄà ¤ÃqÀÄwÛzÀÝ QgÀÄPÀļÀUÀ¼À£ÀÆß ¸À»¹PÉƼÀÄîvÁÛ CªÀ¼ÀÄ ¸ÁV §AzÀ zÁj JµÀÄÖ zÀÄUÀðªÀÄ JAzÀÄ H»¸À®Ä §ºÀıÀ: ¸ÀÄRPÀgÀ ºÁUÀÆ ¸ÀÄgÀPÀëvɬÄAzÀ PÀÆrzÀ fêÀ£À £ÀqɸÀÄwÛgÀĪÀ £À«ÄäAzÀ ¸ÁzsÀåªÁUÀ¯ÁgÀzÀÄ. 

E£ÀÄß ¥ÁQ¸ÁÜ£ÀzÀ°è ºÉtÄÚ ªÀÄPÀ̼À CzÀgÀ®Æè vÁ°Ã¨Á¤ÃAiÀÄgÀ »rvÀzÀ°ègÀĪÀ ¥ÀæzÉñÀUÀ¼À°è CªÀgÀÄUÀ¼À fêÀ£À JµÀÄÖ zÀĸÀÜgÀ JA§ÄzÀ£ÀÄß ``ªÀiÁ¯Á® AiÀÄƸÀÄ¥sï gÀhiÁQ''AiÀÄ WÀl£ÉAiÀÄ£ÀÄß UÀªÀĤ¹zÀgÉ £ÀªÀÄUÉ w½AiÀÄÄvÀÛzÉ.  C°èAiÀÄ PÀoÉÆÃgÀvÉAiÀÄ£ÀÄß «ÄÃj, ¨ÉzÀjPÉUÀ½UÉ CAdzÉ CªÀgÀ£ÀÄß JzÀÄj¹ ¤AvÀ F ¥ÉÆÃjAiÀÄ UÀnÖ UÀÄArUÉUÉ ¸À¯ÁªÀiï ºÉüÀ¯Éà ¨ÉÃPÀÄ. 

EzÀ®èzÉ ºÀgÁåuÁ ¸ÀPÁðgÀzÀ°è ZÁ®PÀ£ÁVgÀĪÀ ZÀArÃWÀqÀzÀ ¸ÀÄgÉÃ±ï ¥Á¯ï JA¨ÁvÀ£À ªÀÄUÀ¼ÀÄ ``¥ÀÆ£ÀªÀiï zsÀįï''£À ¸ÁzsÀ£É PÀÆqÀ ±ÁèWÀ¤ÃAiÀÄ.  F AiÀÄĪÀw vÀ£Àß PÀµÀÖUÀ¼À £ÀqÀĪÉAiÉÄà qÁPÀÖgÉÃmï ªÀiÁqÀ®Ä AiÀÄÄ.J¸ï.¤AzÀ 50,000 qÁ®gï ¸ÁÌ®gï²¥ï ¥ÀqÉ¢gÀĪÀÅzÀÄ PÉêÀ® CªÀ¼À ºÉvÀÛªÀgÀÄ, gÁdåPÀ̵ÉÖà C®èzÉ Erà zÉñÀªÉà ºÉªÉÄä ¥ÀqÀ§ºÀÄzÁzÀAxÀ «µÀAiÀÄ.

¸ÁzsÀ£ÉAiÀÄ vÀÄrvÀ, ±ÀæzÉÞ, ¥ÁæªÀiÁtÂPÀvÉ, bÀ® E«µÀÆÖ EzÀÝgÉ ¸ÁzsÀ£ÉAiÀÄ ºÁ¢ ¸ÀÄ®¨sÀªÁUÀÄvÀÛzÉ JA§ÄzÀÄ EwÛÃaUÉ LLn ¥ÀæªÉñÀ ¥ÀqÉzÀ §qÀvÀ£ÀªÀ£Éßà ºÁ¹ ºÉÆzÀÝgÀÆ zÉÆqÀØ PÀ£À¸ÀÄ PÀAqÀÄ EAzÀÄ CzÀ£ÀÄß £À£À¸ÀÄ ªÀiÁrPÉƼÀÄîªÀvÀÛ ¸ÁVgÀĪÀ ¸ÀļÀå vÁ®ÆQ£À K£ÀPÀ¯ï ªÀÄÆ®zÀ AiÀÄĪÀPÀ ``ªÀÄAdÄ£ÁxÀ''£À ªÀiÁvÀÄ.  LLn ¥ÀæªÉñÀ ¥ÀjÃPÉë §gÉAiÀÄ®Ä vÀ£Àß §qÀvÀ£À CrØAiÀiÁUÀ¨ÁgÀzÉAzÀÄ ºÉÆÃmÉ¯ï ªÀiÁtÂ, PÀÆ° PÁ«ÄðPÀ, PÁåAqÀ¯ï ¥sÁåPÀÖj ºÁUÀÆ PÁåljAUï ¨ÁAiÀiï PÉ®¸ÀUÀ¼À£ÀÆß ªÀiÁrzÁÝ£É.  EAzÀÄ CªÀ£À ¸ÁzsÀ£ÉAiÀÄ£ÀÄß PÀAqÀÄ CªÀ£À vÁ¬Ä ºÉªÉÄä¥ÀqÀĪÀÅzÀgÀ°è C£ÀĪÀiÁ£ÀªÉà E®è.

EªÀjUÀÆ ¨ÉÃgÉ AiÀÄĪÀPÀgÀ ºÁUÉ PÀ£À¸ÀÄUÀ½zÀݪÀÅ, ºÁUÉAiÉÄà CªÀÅUÀ¼À£ÀÄß £À£À¸ÁV¸À®Ä C£ÉÃPÀ vÉÆqÀgÀÄUÀ¼ÀÆ EzÀݪÀÅ.  DzÀgÀÆ CªÀÅUÀ¼À£É߯Áè »ªÉÄänÖ EAzÀÄ vÀªÀÄä PÀ£À¸ÀÄUÀ¼À£ÀÄß £À£À¸ÁV¹PÉÆAqÀÄ ¸ÁzsÀ£ÉAiÀÄ ²RgÀ KjzÁÝgÉAzÀgÉ CzÀPÉÌ ªÀÄÄRå PÁgÀt CªÀgÀ°è£À zsÉÊAiÀÄð, ªÀÄ£ÉÆç® ªÀÄvÀÄÛ ¸Á¢ü¸À¨ÉÃPÉA§ bÀ®.  EªÀgÀÄUÀ¼ÀÆ vÀªÀÄä PÀµÀÖUÀ¼À£ÀÄß JzÀÄj¸À¯ÁUÀzÉ ¸Á«UÉ ±ÀgÀuÁVzÀÝgÉ EAzÀÄ zÉñÀªÉà UÀªÀð ¥ÀqÀĪÀAxÀ ¸ÁzsÀ£É ªÀiÁqÀ®Ä ¸ÁzsÀåªÁUÀÄwÛgÀ°®è.  ªÉÆzÀ®Ä £ÀªÀÄä ªÉÄÃ¯É £ÀªÀÄUÉ £ÀA©PÉ, «±Áé¸ÀUÀ½gÀ¨ÉÃPÀÄ.  DUÀ¯Éà £ÁªÀÅ ¸ÀªÀiÁdªÀ£ÀÄß JzÀÄj¸À®Ä ¸ÁzsÀå.

E£ÀÄß ¥ÉÆõÀPÀgÀÄ, »jAiÀÄgÀÄ, ²PÀëPÀgÀÄUÀ¼ÀÄ PÀÆqÀ vÀªÀÄä PÀÄrUÀ¼À D¸ÀQÛ C©ü¯ÁµÉUÀ¼À£ÀÄß CjvÀÄ ºÁUÉAiÉÄà vÀªÀÄä dªÁ¨ÁÝjUÀ¼À£ÀÄß ¸ÀjAiÀiÁV ¤¨sÁ¬Ä¹zÀ°è, ªÀÄPÀ̽UÉ CxÀªÁ AiÀÄĪÀ ¦Ã½UÉUÉ ¸Àj vÀ¥ÀÄàUÀ¼À£ÀÄß ¸ÀÆPÀÛ jÃwAiÀÄ°è «ªÀj¹ CªÀgÀ ¸ÁzsÀ£ÉUÉ ¸ÀÆàwðAiÀiÁUÀ¨ÉÃPÉà ºÉÆgÀvÀÄ, vÀªÀÄä D¸ÉUÀ¼À£ÀÄß vÀªÀÄä ªÀÄPÀ̼À ªÉÄÃ¯É ºÉÃj MvÀÛqÀzÀ ªÁvÁªÀgÀt ¸ÀÈ¶× ªÀiÁqÀ¨ÁgÀzÀÄ.  »jAiÀÄjAzÀ ¹UÀĪÀ ªÀiÁUÀðzÀ±Àð£À, ¸À®ºÉUÀ¼ÀÄ ªÉÆÃnªÉÃnªï DVgÀ¨ÉÃPÉà ºÉÆgÀvÀÄ MvÀÛqÀ J¤¸À¨ÁgÀzÀÄ.  RArvÀªÁVAiÀÄÆ AiÀÄĪÀd£ÀvÉUÉ ¸ÀjAiÀiÁV ªÀiÁUÀðzÀ±Àð£À ªÀiÁr w½ ºÉýzÀgÉ vÀªÀÄä vÀ¥ÀÄàUÀ¼À£ÀÄß w¢ÝPÉÆAqÀÄ ªÀÄÄ£ÀßqÉAiÀÄ®Ä AiÀÄĪÀ d£ÀvÉAiÀÄÆ ¸ÀzÁ ¹zÀÞ«gÀÄvÀÛzÉ.

AiÀiÁªÀÅzÀÄ K£Éà DzÀgÀÆ ªÉÆzÀ®Ä £ÁªÀÅ w½AiÀĨÉÃPÁzÀÄÝ ``§zÀÄPÀÄ §AdgÀÄ ¨sÀÆ«ÄAiÀÄ®''è.  CzÀ£ÀÄß GwÛ, ©wÛ, ¨É¼É ¨É¼ÉAiÀÄĪÀ ¸ÀºÀ£É, ±ÀQÛ ªÀÄvÀÄÛ ¸ÁªÀÄxÀåð £ÀªÀÄä°ègÀ¨ÉÃPÀÄ.  RArvÀªÁUÀ®Æ J®ègÀ®Æè F ¸ÁªÀÄxÀåð«gÀÄvÀÛzÉ.  CzÀ£ÀÄß w½zÀÄPÉƼÀîzÉ ``DvÀÄgÀUÉÃrUÉ §Ä¢Þ ªÀÄlÖ'' JA§AvÉ CªÀ¸ÀgÀzÀ §Ä¢ÞUÉÃr ¤zsÁðgÀUÀ½AzÀ ¸ÁAiÀÄĪÀ°è vÉÆÃgÀĪÀ zsÉÊAiÀÄðªÀ£ÀÄß, §zÀÄQ ¸Á¢ü¸À®Ä vÉÆÃj¹zÀgÉ RArvÀªÁVAiÀÄÆ £ÀªÀÄä fêÀ£ÀªÉA§ ¨sÀÆ«ÄAiÀÄ®Æè ¥sÀ®ªÀvÁÛzÀ ¨É¼É ¨É¼ÉAiÀÄÄvÀÛzÉ.


£À«Ã£ï PÀĪÀiÁgï.PÉ.